ಶ್ರಮಜೀವಿಗಳ ಹಾಡು

ನಾವು ಕಟ್ಟಿದ ಗೆದ್ದಲಗೂಡು
ನಿಮಗಾಯಿತು ಹುತ್ತ.
ನಾವು ಹೊತ್ತ ಮಣ್ಣಿನ ಕನಸು
ನಿಮಗಾಯಿತು ನನಸು.
ನಾವು ನೀರೆರೆದ ಹೂವು ಹಣ್ಣು
ನಮಗಾದವು ಹುಣ್ಣು.

ಮೂಸಿ ನೋಡದ ಕಾಡು ಕಲ್ಗಳ
ಮುದ್ದಾಡಿದೆವು ನಾವು
ಕಲ್ಲು ಕಂದಗಳ ಹೊತ್ತು ತಂದೆವು
ಕೋಟೆ ಕೊತ್ತಲಕೆ ಕಾಯ ಕೊಟ್ಟೆವು
ಕೋಟಿ ಕೈಗಳ ಕೋಟೆಯ ಕೆಳಗೆ
ಲಯವಾಯಿತು ಉಸಿರು
ದಣಿಗಳದೇ ಹೆಸರು.

ಕಲ್ಲಿನಲಿ ನಾವ್ ಕಣ್ಣ ಕಂಡೆವು
ಮೈಯ ಮುಟ್ಟುತ ಮೋದವುಂಡೆವು
ಎಳೆ ಎಳೆ ಬಿಡಿಸುತ ಜೀವ ಕೊಟ್ಟೆವು
ಎದ್ದು ನಿಂತಿತು ದೇವಸ್ಥಾನ
ಕೆಸರು ಗದ್ದೆಯ ಕಾರಸ್ಥಾನ.

ನರನರದಲಿ ಹೆಡೆಯೆತ್ತುತ
ನೀವ್ ಹರಿದಾಡುತ
ಮನ ಮಾರಿದೆವು ನಾವು
ಕರುಳನು ಕಿತ್ತು
ಕೊರಳಲ್ಲಿ ಧರಿಸಿ
ಮೆರೆದಾಡಿದಿರಿ ನೀವು

ಕಂಡ ಕಂಡವರ ಕವಚವಾದವರು
ಸುಖ ತೆತ್ತವರು, ಸಾವ ಕಂಡವರು
ದಾರಿ ಕಾಣುವೆವು ನಾವು
ಗೋರಿಯೊಳಗಡೆಯೆ ಘೋಷಣೆ ಕೂಗಿ
ಸಿಡಿದೇಳುವೆವು ನಾವು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಿಳೆ – ಭಾವನಾತ್ಮಕ ಕ್ರಿಯಾತ್ಮಕ ಸಂವೇದನೆಗಳು
Next post ಸಿಹಿಯಾದ ಶಿಕ್ಷೆ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

cheap jordans|wholesale air max|wholesale jordans|wholesale jewelry|wholesale jerseys